Courtesy :
ಸೂರ್ಯವಂಶಿ ಈಗಾಗಲೇ ವಿಶ್ವ ಕ್ರಿಕೆಟ್ನಲ್ಲಿ ಕೆಲವು ಅತ್ಯುತ್ತಮ ದಾಖಲೆಗಳನ್ನು ಮುರಿದಿದ್ದಾರೆ ಮತ್ತು ಭಾರತದ ಹಿರಿಯರ ತಂಡಕ್ಕೆ ಹೆಸರಿಸಲ್ಪಟ್ಟ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.ಹಿಂದೆ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಮತ್ತು ಎಂಎಸ್ ಧೋನಿಯಂತಹ ಆಟಗಾರರನ್ನು ನೋಡಲು ಅಭಿಮಾನಿಗಳು ಕ್ರೀಡಾಂಗಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ನುಗ್ಗುತ್ತಿದ್ದರು. ಇಂದಿನ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಸ್ಟಾರ್ ಆಟಗಾರರನ್ನು ಕಣ್ತುಂಬಿಕೊಳ್ಳಲು ಸಹ ಅಭಿಮಾನಿಗಳು ಹಿಂದೆ ಬಿದ್ದಿಲ್ಲ. ಈ ಪಟ್ಟಿಗೆ ಸೇರುತ್ತಿರುವ ಮತ್ತೊಂದು ಹೆಸರು ವೈಭವ್ ಸೂರ್ಯವಂಶಿ. 15ನೇ ವಯಸ್ಸಿನಲ್ಲಿಯೇ ಈ ಬಾಲಕ ಅಭಿಮಾನಿಗಳ ಪಾಲಿಗೆ ನೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದಾನೆ. ಸೂರ್ಯವಂಶಿ ಈಗಾಗಲೇ ವಿಶ್ವ ಕ್ರಿಕೆಟ್ನಲ್ಲಿ ಕೆಲವು ಅತ್ಯುತ್ತಮ ದಾಖಲೆಗಳನ್ನು ಮುರಿದಿದ್ದಾರೆ ಮತ್ತು ಭಾರತದ ಹಿರಿಯರ ತಂಡಕ್ಕೆ ಹೆಸರಿಸಲ್ಪಟ್ಟ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ. ತೆಂಡೂಲ್ಕರ್ ಅವರನ್ನು ಮೀರಿಸಿದ್ದಾರೆ. ಸೂರ್ಯವಂಶಿ ಅವರ ತ್ವರಿತ ಯಶಸ್ಸಿನ ಸಂತೋಷ ಇದೀಗ ಅವರ ಕ್ರಿಕೆಟ್ ಕನಸನ್ನು ನನಸಾಗಿಸಲು ಅವರ ತಂದೆ ಮತ್ತು ತಾಯಿ ಮಾಡಿದ ತ್ಯಾಗದ ಗಾಯಗಳನ್ನು ಗುಣಪಡಿಸಿದೆ ಎಂದರೆ ತಪ್ಪಾಗಲಾರದು. ವೈಭವ್ ಸೂರ್ಯವಂಶಿ ಅವರ ತರಬೇತಿಗೆ ಹಣ ಒದಗಿಸಲು ಅವರ ಕುಟುಂಬವು ತಮ್ಮ ಪೂರ್ವಜರ ಭೂಮಿಯನ್ನೇ ಮಾರಾಟ ಮಾಡಬೇಕಾಯಿತು ಎಂದು ವರದಿಯಾಗಿದೆ. ವಿಶೇಷವಾಗಿ ಪೂರ್ವಜರಿಂದ ಬಂದ ಭೂಮಿಯನ್ನು ಮಾರಾಟ ಮಾಡುವುದು ಯಾವುದೇ ಕುಟುಂಬಕ್ಕೆ ಸುಲಭದ ಕೆಲಸವಲ್ಲ. ಆದರೆ, ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಅವರಿಗೆ ತಮ್ಮ ಮಗನ ಕನಸುಗಳು ನನಸಾಗಬೇಕಾದರೆ ಅದನ್ನು ಮಾಡಲೇಬೇಕೆಂದು ತಿಳಿದಿತ್ತು. 'ಈಗ ಎಲ್ಲವೂ ಅದನ್ನು ಮೀರಿ ಹೋಗಿದೆ. ಕನಸು ನನಸಾಗಿದೆ. ಭೂಮಿ ಮತ್ತು ಹಣ ಇನ್ನು ಮುಂದೆ ಮುಖ್ಯವಲ್ಲ. ಭಾರತ ಮತ್ತು ವಿದೇಶಗಳಲ್ಲಿ ತನ್ನ ಮಗನಿಗೆ ಸಿಗುತ್ತಿರುವ ಗೌರವ ಮತ್ತು ಮನ್ನಣೆ ನಮಗೆ ತುಂಬಾ ಸಂತೋಷವನ್ನು ನೀಡುತ್ತದೆ' ಎಂದು ಸಂಜೀವ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದೊಂದಿಗಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಒಪ್ಪಂದದ ಮೂಲಕ ವಾರ್ಷಿಕವಾಗಿ ₹1.10 ಕೋಟಿ ಗಳಿಸುವ ವೈಭವ್, ಭಾರತೀಯ ಕ್ರಿಕೆಟ್ನ ಉತ್ತುಂಗಕ್ಕೇರುವ ಹಾದಿಯಲ್ಲಿದ್ದಾರೆ. ಅವರ ತಂದೆ ಸಂಜೀವ್ ಅವರು ಹಿಂದೆ ಮಾಡಿದ ತ್ಯಾಗದಿಂದಲೇ ಇಂದು ಅವರು ಪ್ರಪಂಚದಾದ್ಯಂತ ಅವರು ಪಡೆಯುತ್ತಿರುವ ಮೆಚ್ಚುಗೆಗೆ ಕಾರಣವಾಗಿದೆ.
11-06-2026